Site icon Suddi Belthangady

ದ್ವಿಚಕ್ರ ವಾಹನ ಅಪಘಾತ: ಮೂವರಿಗೆ ಗಾಯ

ಬೆಳ್ತಂಗಡಿ: ದ್ವಿಚಕ್ರ ವಾಹನ ಅಪಘಾತದಿಂದ ಮೂವರು ಗಾಯಗೊಂಡಿರುವ ಕುರಿತು ನಾಳ ಸಮೀಪದ ನ್ಯಾಯತರ್ಪು ನಿವಾಸಿ ಅನುಷ ಬಿ. (27ವ) ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.20ರಂದು ರಾತ್ರಿ ಅಶ್ವಥ್ ಎಂಬವರೊಂದಿಗೆ (ಕೆ.ಎ. 19 HQ 3529) ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಸಹಸವಾರಳಾಗಿ ಅನುಷಾ ಹಾಗೂ ಅವರ ಮಗ ರಿದ್ವಿನ್ ಅವರು ಗೇರುಕಟ್ಟೆ ಕಡೆಯಿಂದ ಗೋವಿಂದೂರು ಕಡೆ ತೆರಳುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕಾರಿದಡಿ ಎಂಬಲ್ಲಿ ತಲುಪಿದಾಗ ಅಶ್ವಥ್ ಅವರು ವಾಹನವನ್ನು ದುಡುಕುತನದಿಂದ ಸವಾರಿ ಮಾಡಿದ ಪರಿಣಾಮ ಅನುಷಾ, ರಿದ್ವಿನ್ ಹಾಗೂ ಅಶ್ವಥ್ ಅವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

ಗಾಯಾಳುಗಳು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 87/2024ರಂತಸ ಕಲಂ: 281, 125(A), BNSರಡಿ ಪ್ರಕರಣ ದಾಖಲಾಗಿದೆ.

Exit mobile version