Site icon Suddi Belthangady

ಬೆಳ್ತಂಗಡಿ: ಬಿಎಂಏಸ್ ರಿಕ್ಷಾ ಚಾಲಕರ ಸಂಘದ ಕ್ಷೇಮ ನಿಧಿ ಯೋಜನೆಯಿಂದ ಸಹಾಯಧನ

ಬೆಳ್ತಂಗಡಿ: ಬಿಎಂಏಸ್ ರಿಕ್ಷಾ ಚಾಲಕರ ಆಪಾತ್ಕಾಲದ ಕ್ಷೇಮ ನಿಧಿ ಯೋಜನೆಯ 17ನೇ ಸಹಾಯಧನ ರೂ.10,000/ ವನ್ನು ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘ ಪಿಲಿಗೂಡು ಇದರ ಸದಸ್ಯರಾಗಿರುವ ಮಾಜಿ ಅಧ್ಯಕ್ಷರಾಗಿದ್ದ ಬಾಬು ಪೂಜಾರಿ ಇವರು ಪಾರ್ಶ್ವವಾಯು ತೊಂದರೆಯಿಂದ ಬಳಲುತ್ತಿದ್ದು ಇವರನ್ನು ಬೆನಕ ಆಸ್ಪತ್ರೆ ಉಜಿರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು. ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು. ಬಿಎಂಏಸ್ ರಿಕ್ಷಾ ಚಾಲಕರ ಸಂಘ ತಾಲೂಕು ಸಮಿತಿಯ ಸದಸ್ಯರಾದ ಜಗದೀಶ್ ಶೆಟ್ಟಿ ಕಣಿಯೂರು ಅವರು ಈ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಿದರು.

ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘ ಪಿಲಿಗೂಡು ಇದರ ಅಧ್ಯಕ್ಷ ಸೀತಾರಾಮ, ಸದಸ್ಯರಾದ ಚಿದಾನಂದ, ಬಾಲಕೃಷ್ಣ, ಉಮ್ಮರ್ ಕುಂಞ, ಕಾರ್ತಿಕ್ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.

Exit mobile version