Site icon Suddi Belthangady

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗೆ ಮಂಗಳೂರು ಕೆಥೋಲಿಕ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಫಾ|ಪ್ರವೀಣ್ ಲಿಯೊ ಲಸ್ರಾದೊ ಭೇಟಿ

ಉಜಿರೆ: ಆ.17ರಂದು ಅನುಗ್ರಹ ಶಿಕ್ಷಣ ಸಂಸ್ಥೆಗೆ ಕೆಥೋಲಿಕ್ ವಿದ್ಯಾ ಸಂಸ್ಥೆಗಳು ಮಂಗಳೂರು ಇದರ ಕಾರ್ಯದರ್ಶಿಗಳಾದ ಫಾ|ಪ್ರವೀಣ್ ಲಿಯೊ ಲಸ್ರಾದೊ ಇವರು ಅಧಿಕೃತವಾಗಿ ಭೇಟಿ ನೀಡಿದರು. ಶಾಲೆಯ ಆಕರ್ಷಕ ಬ್ಯಾಂಡ್ ಹಾಗೂ ಪೂರ್ಣಕುಂಭ ಕಲಶದ ಮೂಲಕ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಗಳಾದ ಪ್ರವೀಣ್ ಲಿಯೊ ಲಸ್ರಾದೊ ಅವರು ನೃತ್ಯ ಕಾರ್ಯಕ್ರಮ ಹಾಗೂ ರೂಪಕವನ್ನು ನಡೆಸಿಕೊಟ್ಟ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ವಿದ್ಯಾರ್ಥಿಗಳಾದ ನೀವು ಪೋಷಕರನ್ನು, ಶಿಕ್ಷಕರನ್ನು ಹಾಗೂ ದೇಶವನ್ನು ಗೌರವಿಸಬೇಕು ಹಾಗೂ ಪ್ರೀತಿಸಬೇಕು ಎಂಬ ಸಂದೇಶ ನೀಡಿದರು.

ನಂತರ ಕಾರ್ಯದರ್ಶಿಗಳು ನೂತನ ಕಂಪ್ಯೂಟರ್ ಕೊಠಡಿ, ನೂತನ ಗ್ರಂಥಾಲಯ ಹಾಗೂ ನೂತನ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ಫಾ|ವಿಜಯ್ ಲೋಬೊ ಸ್ವಾಗತಿಸಿದರು. ಸಹಶಿಕ್ಷಕಿಯಾದ ವಿನಯಲತಾ ಇವರು ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.

Exit mobile version