Site icon Suddi Belthangady

ಇಂದಬೆಟ್ಟು: 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದಬೆಟ್ಟು: ವಿಶ್ವ ಹಿಂದೂ ಪರಿಷತ್ ಮತ್ತು ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 25ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಆ.22ರಂದು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಆನಂದ್ ಭಟ್, ಸತೀಶ್ ಬೆಳ್ಳೊರು ಗುತ್ತು, ಗೌರವ ಅಧ್ಯಕ್ಷ ಡಾಕ್ಟರ್ ಪ್ರದೀಪ್ ನಾವೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಂಜೀವ ಗೌಡ ಮನ್ನಡ್ಕ, ಪ್ರಾ.ಕಾರ್ಯದರ್ಶಿ ಗಣೇಶ್ ನಾವೂರು, ಧರ್ಣಪ ಮೂಲ್ಯ ನಾವೂರು, ರಮೇಶ್ ಕೆಂಗಾಜೆ, ಪಳನಿ ಸ್ವಾಮಿ, ವಿನೋದ್ ಪ್ರಸಾದ್ ಕಲ್ಲಾಜೆ, ಶ್ರೀಧರ ಮುಗೇರ ನೇತ್ರಾವತಿ ನಗರ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಹೊಡಿಕ್ಕಾರು, ನವೀನ್ ಜೈನ್, ಗಂಗಯ್ಯ ಮುಗೇರ ದೇವನಾರಿ, ರಾಘವೇಂದ್ರ ಗುಡಿಗಾರ್, ಶ್ರೀಕಾಂತ್ ಎಸ್ ಇಂದಬೆಟ್ಟು, ನಿತೇಶ್ ಕಡಿತ್ಯಾರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಸೆಪ್ಟೆಂಬರ್ 1ರಂದು ದೇವನಾರಿ ಯಲ್ಲಿ ಕೆಸರು ಗದ್ದೆ ಕ್ರಿಡಾ ಕೂಟ ಹಾಗೂ ಸೆಪ್ಟೆಂಬರ್ 7 ಮತ್ತು 8 ರಂದು ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.

Exit mobile version