Site icon Suddi Belthangady

ಧರ್ಮಸ್ಥಳದಲ್ಲಿ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ- ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ

ಧರ್ಮಸ್ಥಳ: ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಸಭಾಂಗಣದಲ್ಲಿ ಆ.22ರಂದು ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ, ರುಡ್ ಸೆಟ್ ಸಂಸ್ಥೆಯ ಅಧ್ಯಕ್ಷರು ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕೆನರಾ ಬ್ಯಾಂಕ್ ಎಕ್ಸಿ ಕ್ಯುಟಿವ್ ಡೈರೆಕ್ಟರ್ ಭಾವನೇಂದ್ರ ಕುಮಾರ್ ಕೆನರಾ ಬ್ಯಾಂಕ್ ಬೆಂಗಳೂರು ಚೀಫ್ ಜನರಲ್ ಮೆನೇಜರ್ ಕೆ. ಜೆ.ಶ್ರೀಕಾಂತ್, ಕೆನರಾ ಬ್ಯಾಂಕ್ ಜೆನರಲ್ ಮೆನೇಜರ್ ಸುಧಾಕರ ಕೋಟ್ಟಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರುಡ್ ಸೆಟ್ ಎಕ್ಸಿಕ್ವೆಟಿವ್ ಡೈರೆಕ್ಟರ್ ಬಿ.ಪಿ.ವಿಜಯ ಕುಮಾರ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು.ಉಜಿರೆ ರುಡ್ ಸೆಟ್ ಡೈರೆಕ್ಟರ್ ಅಜೇಯ ವಂದಿಸಿದರು. ಅನಸೂಯ ನಿರೂಪಿಸಿದರು.

ದೇಶದ ವಿವಿಧ ರಾಜ್ಯದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

Exit mobile version