Site icon Suddi Belthangady

ಪ್ರಸನ್ನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ಶ್ರಿ ಗುರುದೇವ ಪ.ಪೂ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜಿನ ತಾಲೂಕು ಮಟ್ಟದ ಬಾಲಕರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಪ್ರಸನ್ನ ಪಿಯು ಕಾಲೇಜು, ಅಸೋಸಿಯೇಟೆಡ್ ವಿತ್ ಎಎ ಅಕಾಡೆಮಿ ವಿದ್ಯಾರ್ಥಿ ಚಂದನ್ ಬಿ.ಯು ಹಾಗೂ ಬಾಲಕಿಯರ ವಿಭಾಗದಲ್ಲಿ ಕವನ ಹೆಚ್.ಜೆ ಮತ್ತು ರಮ್ಯಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಧನುಷ್ ಎಮ್.ಎನ್ ತರಬೇತಿ ನೀಡಿರುತ್ತಾರೆ.

Exit mobile version