Site icon Suddi Belthangady

ಬೆಳಾಲು: ಮಾಯ ಮಹೇಶ್ವರ ಭಜನಾ ಮಂಡಳಿಯಲ್ಲಿ ರಕ್ಷಾ ಬಂಧನ

ಬೆಳಾಲು: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ವತಿಯಿಂದ ಆ.19ರಂದು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.ಬೆಳಾಲು ಶ್ರೀ ಧ.ಮ.ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಕ್ಷಾ ಬಂಧನದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ಹೇಳಿ ಶುಭ ಹಾರೈಸಿದರು.

ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಪದಾಧಿಕಾರಿಗಳಾದ ಭವಾನಿ ದಿನೇಶ್ ಗೌಡ ಮಾರ್ಪಲ್, ಶಿವಪ್ರಸಾದ್ ಕಪ್ಪೆಹಳ್ಳ, ಶಶಿಧರ ಗೊಲ್ಲ, ರಂಜನ್ ಹೊಸಮನೆ, ಶ್ರೀನಿವಾಸ್ ಪುಚ್ಚೆಹಿತ್ಲು, ಶಶಿಧರ್ ಗೊಲ್ಲ, ಗಣೇಶ್ ಕನಿಕ್ಕಿಲ, ರೋಹಿತಾಕ್ಷ ಆಚಾರ್ಯ, ಬಾಲಚಂದ್ರ ಆಚಾರ್ಯ, ಸುರೇಶ್ ಕನಿಕ್ಕಿಲ ಗೌರೀಶ್ ಗಾಂಧಿನಗರ ಮೊದಲದವರು ಹಾಜರಿದ್ದರು.

ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಗಂಗಾಧರ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Exit mobile version