Site icon Suddi Belthangady

ಭಾರತೀಯ ಜೈನ್ ಮಿಲನ್ ವೇಣೂರು ವಲಯದ ಮಾಸಿಕ ಸಭೆ

ವೇಣೂರು: ಭಾರತೀಯ ಜೈನ್ ಮಿಲನ್ ವೇಣೂರು ವಲಯ 8 ಶಾಖೆ ಸಂಖ್ಯೆ 797 ಜುಲೈ ತಿಂಗಳ ಮಾಸಿಕ ಸಭೆ ಹಾಗೂ ಆಹಾರವೋತ್ಸವ ಕಾರ್ಯಕ್ರಮ ಆ.15ರಂದು ಶ್ರೀ ಬಾಹುಬಲಿ ಸಭಾಭವನ ವೇಣೂರಿನಲ್ಲಿ ನಡೆಯಿತು.ವೀರಾಂಗನೆಯರು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 50 ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು .ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು.

ಆಹಾರೋತ್ಸವದ ಉದ್ಘಾಟನೆಯನ್ನು ತಿಮ್ಮಣ್ಣರಸರಾದ ಡಾಕ್ಟರ್ ಪದ್ಮಪ್ರಸಾದ್ ಅಜೀಲರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಹತ್ವದ ಕುರಿತು ಉದ್ಘಾಟರಕರು ಮತ್ತು ಅತಿಥಿಗಳು ವಿವರಿಸಿದರು. ವಿಜಯರಾಜ ಅಧಿಕಾರಿ ಅವರ ಪ್ರಾರ್ಥಿಸಿದರು‌.ನಿರ್ಮಲ್ ಕುಮಾರ್ ಜೈನ್ ಸ್ವಾಗತಿಸ, ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.ಸುನಿತಾ ಎನ್ ಬಲ್ಲಾಳ್ ರವರ ಶಾಂತಿ ಮಂತ್ರ ಹೇಳಿದರು.

Exit mobile version