Site icon Suddi Belthangady

ಆರ್‌ಎಫ್‌ಒ ಸಂಧ್ಯಾ ಎಸ್. ಮಂಗಳೂರಿಗೆ ವರ್ಗಾವಣೆ

ಬೆಳ್ತಂಗಡಿ: ವಲಯ ಅರಣ್ಯಾಧಿಕಾರಿ ಬೆಳ್ತಂಗಡಿಯ ಸಂಧ್ಯಾ ಎಸ್. ಮಂಗಳೂರಿ ನಲ್ಲಿರುವ ಲೀಗಲ್ ಮತ್ತು ಐಸಿಟಿ ಉಪ ಅರಣ್ಯಸಂರಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ವನ್ಯಜೀವಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾರನ್ನು ಸುಳ್ಯದ ಪಂಜ ವಲಯಕ್ಕೆ ಕೆಲದಿನಗಳ ಹಿಂದೆ ವರ್ಗಾಯಿಸಿ ಆದೇಶಿಸಲಾಗಿತ್ತು. ಈ ಆದೇಶದಲ್ಲಿ ಈಗ ಬದಲಾವಣೆಯಾಗಿದ್ದು, ಪಂಜದ ಬದಲು ಮಂಗಳೂರಿಗೆ ವರ್ಗಾಯಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಸಂಧ್ಯಾ ಎಸ್. ಈ ಹಿಂದೆ ಉಪ್ಪಿನಂಗಡಿ, ಬೆಳ್ತಂಗಡಿ ಸಹಿತ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು.

Exit mobile version