Site icon Suddi Belthangady

ಶಿಬರಾಜೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅನ್ನಛತ್ರ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಅನುದಾನದ ಮಂಜೂರಾತಿ ಪತ್ರ ಬಿಡುಗಡೆ

ಕಳೆಂಜ ಗ್ರಾಮದ ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅನ್ನಛತ್ರ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ 50,000 ಅನುದಾನದ ಮಂಜೂರಾತಿ ಪತ್ರವನ್ನು ಭಜನಾ ಮಂದಿರದ ಟ್ರಸ್ಟ್ ಅಧ್ಯಕ್ಷ ವಿನೋದರ ಗೌಡ ಹಾಗು ಪದಾಧಿಕಾರಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಅರಣ್ಯ ಸಮಿತಿ ಅಧ್ಯಕ್ಷರಾದ ಧನಂಜಯ ಗೌಡ, ಭಜನಾ ಮಂಡಳಿ ಪದಾಧಿಕಾರಿಗಳಾದ ಹರೀಶ್ ಗೌಡ, ಚಂದ್ರಶೇಖರ ಗೌಡ, ವಿನಯ ಗೌಡ, ಬಾಬು ಗೌಡ, ವಾಸಪ್ಪ ಗೌಡ, ಲಕ್ಷ್ಮೀನಾರಾಯಣ, ಮಾದವ ಗೌಡ, ಗೋಪಾಲ ಗೌಡ, ಶಿವಪ್ಪ ಗೌಡ, ಕೇಶವ ಗೌಡ, ವಲಯ ಮೆಲ್ವಿಚ್ಜಾರಕ ರವೀಂದ್ರ ಬಿ ಹಾಗು ಸೇವಾಪ್ರತಿನಿಧಿ ಕುಮಾರಿ ಭವಾನಿಯವರು ಉಪಸ್ಥಿತರಿದ್ದರು.

Exit mobile version