Site icon Suddi Belthangady

ಮುಗುಳಿ: ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮುಗುಳಿ: ಅಂಗನವಾಡಿಯಲ್ಲಿ ಮುಗುಳಿ ಅಂಗನವಾಡಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪಾರ್ವತಿಯವರು ನೆರವೇರಿಸಿ ಶುಭ ಹಾರೈಸಿದರು.

ಈ ಕಾರ್‍ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ಬಿ.ಕೆ. ವಸಂತ ರವರು ಭಾಗವಹಿಸಿ ಸ್ವಾತಂತ್ರ್ಯ ದಿನದ ಮಹತ್ವ ತಿಳಿಸಿದರು.

ಸನತ್ ಕುಮಾರ್ ಜೈನ್ ಮುಗುಳಿ ಸಾತಂತ್ರ್ಯ ನಮಗೆ ಅಹಿಂಸಾತ್ಮಕ ಹೋರಾಟದ ಮುಖಾಂತರ ಬಂದಿದ್ದು ನಮ್ಮ ಹಿರಿಯರು ಇದಕ್ಕಾಗಿ ಪ್ರಾಣವನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಸ್ಥಳೀಯ ನಾಗರಿಕರನ್ನು ಒಳಗೊಂಡಂತೆ ಸ್ವಾತಂತ್ರ್ಯ ದಿನವನ್ನು ವಿವಿಧ ಕ್ರಾರ್ಯಕ್ರಮಗಳ ಮೂಲಕ ಆಚರಿಸುವಂತೆ ವಿನಂತಿಸಿದರು.

ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿ, ಸಹಾಯಕಿ ಭಾರತಿ ಸಹಕರಿಸಿ, ಫಾತಿಮಾ ಧನ್ಯವಾದವಿತ್ತರು.

Exit mobile version