Site icon Suddi Belthangady

ಕಾಯರ್ತಡ್ಕ: ಉಮಾಮಹೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ- ಗುರುಪೂಜೆ ಮತ್ತು ರಕ್ಷಾಬಂಧನ ಕಾರ್ಯಕ್ರಮ

ಕಾಯರ್ತಡ್ಕ: ಉಮಾಮಹೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ, ಗುರುಪೂಜೆ, ಮತ್ತು ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು.

ನೂರಾರು ಭಕ್ತದಿಗಳು ಆಗಮಿಸಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡು ಲಕ್ಷ್ಮೀ ದೇವರ ಕೃಪೆಗೆ ಪಾತ್ರರಾದರು. ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಗುರುರಾಜ್ ಶಬರಾಯ ನೆರವೇರಿಸಿದರು.

ರಕ್ಷಾ ಬಂಧನ ಕಾರ್ಯಕ್ರಮದ ಬೌದ್ಧಿಕ್ ನ್ನು ಮಂಗಳೂರು ವಿಭಾಗ ಶಾರೀರಿಕ್ ಪ್ರಮುಖ್ ಚಿತ್ರಾಕ್ಷಿ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮುಖ್ಯಸ್ಥರಾದ ನೋಣಯ್ಯ ಗೌಡ, ದೇವಸ್ಥಾನದ ಅಧ್ಯಕ್ಷರಾದ ಆನಂದ ಗೌಡ ಮರಕಡ, ಕಾರ್ಯದರ್ಶಿ ವಸಂತ ಮರಕಡ, ದೇವಳದ ಮ್ಯಾನೇಜರ್ ವಿಶ್ವನಾಥ್ ಇಂದಾಡಿ,ಪಂಚಾಯತ್ ಉಪಾಧ್ಯಕ್ಷರಾದ ಮಂಜುನಾಥ್ ಗೌಡ ಹಾರಿತ್ತ ಕಜೆ, ಸದಸ್ಯರಾದ ಹರೀಶ್ ಕೊಯ್ಲಾ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.

Exit mobile version