Site icon Suddi Belthangady

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಪಡಂಗಡಿ: ವರಮಹಾಲಕ್ಷ್ಮಿ ಪೂಜಾ ಸಮಿತಿ ರಾಷ್ಟ್ರ ಸೇವಿತಾ ಸಮಿತಿ, ನಂದಿನಿ ಭಜನಾ ಮಂಡಳಿ ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಇದರ ಸಹಯೋಗದೋಂದಿಗೆ ಆ.16ರಂದು ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ ಪೂಜೆಯು ತಂತ್ರಿಗಳಾದ ಮುಂಡೂರು ಗೋಪಾಲ ಕ್ರಷ್ಣ ಭಟ್ ಮಾಲಾಡಿ ಅವರ ನೇತೃತ್ವದಲ್ಲಿ ಜರಗಿತು.

ಮಧ್ಯಾಹ್ನ ರಕ್ಷಾ ಬಂಧನ ಹಾಗೂ ಧಾರ್ಮಿಕ ಸಭೆ ನಡೆಯಿತು ಧಾರ್ಮಿಕ‌ ಉಪನ್ಯಾಸಕರಾಗಿ ಮಾನನೀಯ ಮೀನಾಕ್ಷಿ ಹೊಯ್ಸಳ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ರಾಷ್ಟ್ರ ಸೇವಿಕಾ ಸಮಿತಿ ಅವರು ವರಮಹಾಲಕ್ಷ್ಮಿ ವ್ರತದ ಬಗ್ಗೆ ಉಪನ್ಯಾಸ ನೀಡಿದರು.ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಘಕರು ಶೀಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಮಲತಾ ಸಂಪತ್ ಸುವರ್ಣ ಉಪಸ್ಥಿತರಿದ್ದರು.ದಿವ್ಯ ಆಚಾರ್ಯ ಸ್ವಾಗತಿಸಿ, ಸುಗುಣ ರಾವ್ ಕಾರ್ಯಕ್ರಮ ನಿರೂಪಿಸಿದರು.ಆಶಾ ಆಚಾರ್ಯ ದನ್ಯವಾದವಿತ್ತರು.

Exit mobile version