Site icon Suddi Belthangady

ಉಜಿರೆ: ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಜಿರೆ: ಉಜಿರೆಯ ವರ್ತಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಉಜಿರೆಯ ಬಸ್ಟ್ಯಾಂಡ್ ನವರೆಗೂ ಅನುಗ್ರಹ ಶಾಲಾ ಮಕ್ಕಳು ಹಾಗೂ ವರ್ತಕರು ಪತಸಂಚಲನದೊಂದಿಗೆ ಬಂದು, ಬಸ್ಟ್ಯಾಂಡಿನ ಮುಂಭಾಗದಲ್ಲಿ ಹಿರಿಯ ವರ್ತಕರಾದ ಭರತ್ ಗೌಡ ಮತ್ತು ಉಜಿರೆಯ ಆನುವಂಶಿಕ ಮುಕ್ತೇಸರಾದ ಶರತ್ ಕೃಷ್ಣ ಪಡುವಟ್ನಾಯ ಮತ್ತು ನಮ್ಮ ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್ ಅವರು ಧ್ವಜಾರೋಹಣವನ್ನು ಮಾಡಿದರು.

ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಹೆಚ್ಚಿನ ವರ್ತಕ ಬಂಧುಗಳು ಉಪಸ್ಥಿತರಿದ್ದರು.

Exit mobile version