Site icon Suddi Belthangady

ಶಾಂತಿವನ ಶ್ರೀ ಧ.ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ಉಜಿರೆ: ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕಿರುತೆರೆ ಚಲನಚಿತ್ರ ನಟಿ ದೀಪಿಕಾ ದಾಸ್ ಭಾಗವಹಿಸಿದ್ದರು. ಶಾಂತಿವನದ ಮುಖ್ಯ ವೈದ್ಯಧಿಕಾರಿಗಳಾದ ಡಾಕ್ಟರ್ ಶಿವಪ್ರಸಾದ್ ಶೆಟ್ಟಿ ಇವರು ಸ್ವಾಗತ ಭಾಷಣವನ್ನು ಮಾಡಿದರು.ಡಾಕ್ಟರ್ ಬಿಂದು ಇವರು ಮುಖ್ಯ ಅತಿಥಿಗಳ ಬಗ್ಗೆ ಪರಿಚಯವನ್ನು ಮಾಡಿದರು.

ನಂತರ ಡಾಕ್ಟರ್ ಶಶಿಕಿರಣ್ ಇವರು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.ನಟಿ ದೀಪಿಕಾ ದಾಸ್ ಮಾತನಾಡಿ ಈ ದೇಶಕ್ಕೆ ಸ್ವತಂತ್ರ ಸಿಗುವಲ್ಲಿ ನಮ್ಮ್ ವೀರ ಯೋಧರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು ಹಾಗೆ ಸ್ವಾತಂತ್ರ್ಯದ ಮಹತ್ವ ಅದರಿಂದ ದೇಶ ಅಭಿವೃದ್ಧಿ ಹೊಂದು ತ್ತಿರುವ ಬಗ್ಗೆ ಹಾಗೂ ಶಾಂತಿವನ ಪ್ರಕೃತಿ ಚಿಕಿತ್ಸೆಯ ಬಗ್ಗೆ ಮಾತನಾಡುತ್ತ ಶಾಂತಿವನದ ಸೇವೆಯನ್ನು ಕೊಂಡಾಡಿದರು. ಹಾಗೂ ಶಾಂತಿವನದ ವೈದ್ಯಧಿಕಾರಿಗಳು ಕಲಿಕಾ ವೈದ್ಯರು ಸ್ನಾತಕೋತ್ತರ ವೈದ್ಯರು ಹಾಗೂ ಚಿಕಿತ್ಸೆಕರ ನಿಸ್ವಾರ್ಥ ಸೇವೆಯನ್ನು ಹಾಗೂ ಪೂಜ್ಯ ಶ್ರೀ ಖಾವಂದರ ಪ್ರಕೃತಿ ಚಿಕಿತ್ಸೆಯ ಕೊಡುಗೆಯನ್ನು ಕೊಂಡಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕಿರುತೆರೆ ಚಲನಚಿತ್ರ ನಟಿ ದೀಪಿಕಾ ದಾಸ್ ಹಾಗೂ ಅವರ ಸಹಪಾಠಿ ತಾಯಿಬಾರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಂತಿವನದ ಮುಖ್ಯ ವೈದ್ಯಧಿಕಾರಿಗಳದ ಡಾಕ್ಟರ್ ಶಿವಪ್ರಸಾದ್ ಶೆಟ್ಟಿ, ವೈದ್ಯಧಿಕಾರಿಗಳದ ಡಾಕ್ಟರ್ ಬಿಂದು, ಡಾಕ್ಟರ್ ಶಶಿಕಿರಣ್, ಯೋಗ ನೈತಿಕ ಶಿಕ್ಷಣದ ನಿರ್ದೇಶಕರಾದ ಡಾಕ್ಟರ್ ಶಶಿಕಾಂತ್ ಜೈನ, ಶಾಂತಿವನದ ಆಡಳಿತಧಿಕಾರಿಗಳಾದ ಜಗನ್ನಾಥ,ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು, ಕಲಿಕಾ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಚಿಕಿತ್ಸಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version