Site icon Suddi Belthangady

ಉಜಿರೆ: ಎರ್ನೋಡಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ

ಉಜಿರೆ: ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ, ಸ್ವಾಮಿ ಕೊರಗಜ್ಜ ಸನ್ನಿಧಿ, ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಶ್ರಿ ಕ್ಷೇತ್ರ ಎರ್ನೋಡಿ ಉಜಿರೆ ಇದರ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು.

ಧ್ವಜಾರೋಹಣ ವನ್ನು ಟ್ರಸ್ಟ್ ನ ಹಿರಿಯ ನಿರ್ದೇಶಕರಾದ ಪೂವಯ್ಯ ಕೇನೆರ ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಯು.ಬಾಬು ಮೊಗೇರ ಎರ್ನೋಡಿ, ಟ್ರಸ್ಟ್ ನ ನಿರ್ದೇಶಕರುಗಳಾದ ಕೆ.ಜಯಂತ ಶೆಟ್ಟಿ ಕುಂಟಿನಿ, ಕೆ.ಸಂಜೀವ ಶೆಟ್ಟಿ ಕುಂಟಿನಿ, ನೋಣಯ್ಯ ಪುಂಜಾಲಕಟ್ಟೆ, ಬಿ.ಕೆ.ಗೋವಿಂದ ಮುಂಡಾಜೆ, ಮತ್ತು ಇತರರಾದ ಟಿ.ಬಾಬು ತುಂಬೆ ದೊಟ್ಟು, ಲೋಕೇಶ್ ದೇವಾಂಗ, ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ ಉಪಸ್ಥಿತರಿದ್ದರು.

Exit mobile version