Site icon Suddi Belthangady

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

ಮುಂಡಾಜೆ: 2023-24ನೇ ಸಾಲಿನಲ್ಲಿ ಸದಸ್ಯರಿಂದ ಬರತಕ್ಕ ಎಲ್ಲಾ ವಿಧದ ಸಾಲಗಳನ್ನು ನೂರು ಶೇಕಡ ವಸೂಲಿ ಮಾಡಿ ಸಂಘದ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿ ಪತ್ರ ಸಹಿತ ಸಾಧನಾ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.

ಸಂಘದ ಪರವಾಗಿ ಅಧ್ಯಕ್ಷ ಜನಾರ್ದನ ಗೌಡ ನೂಜಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಕಾಂತ ಪ್ರಭು ಅವರ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಂಘದ ನಿರ್ದೇಶಕ ರಾಘವ ಕಲ್ಮಂಜ ಉಪಸ್ಥಿತರಿದ್ದರು.

Exit mobile version