Site icon Suddi Belthangady

ಚಾರ್ಮಾಡಿ: ಪ್ರಾ.ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಹಕರಿಸಿದ ರಕ್ಷಿತ್ ಶಿವರಾಂರಿಗೆ ಅಭಿನಂದನೆ ಸಲ್ಲಿಕೆ

ಬೆಳ್ತಂಗಡಿ: ಚಾರ್ಮಾಡಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ 20 ಲಕ್ಷ ರೂಪಾಯಿಗಳ ಅನುದಾನ ಮಂಜೂರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ ಚಾರ್ಮಾಡಿ ಗ್ರಾಮದ ಪ್ರಮುಖರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಿತಾ ಪೂಜಾರಿ ಹಾಗೂ ಪ್ರಮುಖರಾದ ಯಶೋಧರ ಚಾರ್ಮಾಡಿ, ಜಾರ್ಜ್‌ ಎಮ್ ವಿ ಚಿಬಿದ್ರೆ, ಸಂಶುದ್ದಿನ್ ಚಾರ್ಮಾಡಿ, ನಿತಿನ್ ಚಾರ್ಮಾಡಿ, ಅನಿಲ್ ಚಾರ್ಮಾಡಿ, ಉಸ್ಮಾನ್ ಚಾರ್ಮಾಡಿ, ರಮೇಶ್ ಕತ್ತರಿಗುಡ್ಡೆ, ಹರೀಶ್ ದೇವಾಡಿಗ, ಹರೀಶ್ ಪರ್ಲಾಣಿ, ರಘುನಾಥ್ ಗೌಡ ಚಾರ್ಮಾಡಿ, ಇಮ್ರಾನ್ ಚಿಬಿದ್ರೆ, ಅಜೀಜ್ ಚಾರ್ಮಾಡಿ ಉಪಸ್ಥಿತರಿದ್ದರು.

Exit mobile version