Site icon Suddi Belthangady

ಗ್ರಾಮಾಭಿವೃದ್ಧಿ ಯೋಜನೆ ಕೊಲ್ಪಾಡಿ ಒಕ್ಕೂಟದಿಂದ ಶ್ರಮದಾನದ ಮೂಲಕ ಶಾಲಾ ವಠಾರ ಸ್ವಚ್ಛತೆ

ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಜಿರೆ ವಲಯ ಬೈಪಾಡಿ ಕಾರ್ಯಕ್ಷೇತ್ರದ ಕೊಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತ ವಠಾರ ಸ್ವಚ್ಛಗೊಳಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಮಾಧವ ಗೌಡ ಓಣಾಜೆ, ಶಾಲಾ ಶಿಕ್ಷಕ ಕರಿಯಣ್ಣ ಬೇರಿಕೆ, ಕೊಲ್ಪಾಡಿ ಒಕ್ಕೂಟದ ಅಧ್ಯಕ್ಷೆ ನೀಲಾವತಿ, ಕಾರ್ಯದರ್ಶಿ ಉಮಾದೇವಿ, ವಲಯ ಮೇಲ್ವಿಚಾರಕಿ ವನಿತಾ ಹಾಗೂ ಒಕ್ಕೂಟ ಸದಸ್ಯರು ಶಾಲಾ ಮಕ್ಕಳ ಪೋಷಕರು ಭಾಗವಹಿಸಿದ್ದರು.

Exit mobile version