Site icon Suddi Belthangady

ಉರುವಾಲು: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸೇವಾ ಸಮಿತಿ ವತಿಯಿಂದ ಉಚಿತ ಸಮವಸ್ತ್ರ ವಿತರಣೆ

ಉರುವಾಲು: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆಗಸ್ಟ್ 12ರಂದು ಶಾಲಾ ಸೇವಾ ಸಮಿತಿ ವತಿಯಿಂದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಸೇವಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಭಟ್ ವಹಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರತಿನಿಧಿಯಾಗಿ ಹಾರಕೆರೆ ನಾರಾಯಣ ಭಟ್, ದಿಗ್ದರ್ಶಕರಾದ ಈಶ್ವರ್ ಭಟ್ ಮಾಯಿಲ್ತೋಡಿ , ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಗಳಾದ ಶಿವಪ್ರಸಾದ್, ಸಲಹೆಗಾರರಾದ ಸತೀಶ್ ಬನಾರಿ, ಶಾಲಾ SDMC ಅಧ್ಯಕ್ಷರುಗಳಾದ ಮಹಮ್ಮದ್ ಪೀರ್ಯ, ಉರುವಾಲು ಮಸೀದಿ ಅಧ್ಯಕ್ಷರುಗಳಾದ ಹಮೀದ್, ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಶೋಭಿತ ಕೆ ಆರ್, ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಸಣ್ಣಪ್ಪ H. ಹಾಗೂ ಪೋಷಕರ ಸಮ್ಮುಖದಲ್ಲಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶಾಹಿದ ಬಾನು ನಿರೂಪಿಸಿದರು, ಮುಖ್ಯಶಿಕ್ಷಕ ಸಣ್ಣಪ H. ಸ್ವಾಗತಿಸಿದರು, ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕಿ ಸುಮಯ್ಯ ಧನ್ಯವಾದ ಸಮರ್ಪಿಸಿದರು.

Exit mobile version