Site icon Suddi Belthangady

ನಾರ್ಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಆಟಿದ ಗಮ್ಮತ್

ಧರ್ಮಸ್ಥಳ: ಎರ್ಮುಂಜ ಬೈಲ್ ನಾರ್ಯ ಇಲ್ಲಿನ ಗೌಡರ ಯಾನೆ ಒಕ್ಕಲಿಗ ಗ್ರಾಮದ ಜನರ ಆಟಿದ ಗಮ್ಮತ್ ಕಾರ್ಯಕ್ರಮ ಸುಜ್ಞಾನ ಭವನ ಎರ್ಮುಂಜ ಬೈಲ್ ನಾರ್ಯ ಇಲ್ಲಿ‌ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಎರ್ಮುಂಜ ಬೈಲ್ ಅಧ್ಯಕ್ಷರು ಧರ್ಮಪ್ಪ ಗೌಡ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪ್ರಕಾಶ್ ಗೌಡ ಅಪ್ರಮೇಯ ಉಪನ್ಯಾಸವನ್ನು ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಶಿಕ್ಷಕಿ ಕಸ್ತೂರಿ ಜಗದೀಶ್ ಗೌಡ ನೆರವೇರಿಸಿದರು.ವೇದಿಕೆಯಲ್ಲಿ ಸುರೇಶ್ ಗೌಡ ಕೌಡಂಗೆ, ನಿಕ್ಷಿತಾ ಜೋಗಿನಾರು, ಸ್ವಾತಿ ಗೋಳಿದಡಿ, ಸರಸ್ವತಿ ದಿವಾಕರ ಗೌಡ ಕೆಳಗಿನ ಹಿಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಯನಂದ ಗೌಡ ಮಲ್ಯಾಳ ನಿರೂಪಿಸಿ, ಶಾಂತಪ್ಪ ಗೌಡ ಇಜ್ಜಲ ಸ್ವಾಗತಿಸಿ, ಪ್ರಮೀಳ ಪರಮೇಶ್ವರ ವಂದಿಸಿದರು.

Exit mobile version