ಬಂದಾರು: ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದ ವತಿಯಿಂದ ಆಗಸ್ಟ್ 11ರಂದು ಬಂದಾರು ಮುಖ್ಯ ರಸ್ತೆಯಿಂದ ಶ್ರೀ ರಾಮ ನಗರಕ್ಕೆ ಹೋಗುವ ರಸ್ತೆ ಇಕ್ಕೆಲದಲ್ಲಿದ್ದ ಗಿಡಗoಟಿಗಳನ್ನು ತೆಗೆದು ಸ್ವಚ್ಛತೆ ಮತ್ತು ನೆಟ್ಟ ಗಿಡಗಳ ಅಕ್ಕ ಪಕ್ಕ ಸ್ವಚ್ಛತೆ ಪೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಳಗ ಅಧ್ಯಕ್ಷರು ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಬಹಳ ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಂಡರು.
ಗ್ರಾಮಸ್ಥರು ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.