Site icon Suddi Belthangady

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ- ಗ್ರಾಮಸ್ಥರಿಂದ ಗುಂಡಿ ಮುಚ್ಚುವ ಕಾರ್ಯ

ಮುಂಡಾಜೆ: ಏರೆಗಾವ್ ಯೇ ಕಿರಿಕಿರಿ..ರಾತ್ರಿಯಾದ್ರೆ ಈ ರಸ್ತೆಯಲ್ಲಿ ಏನಾದ್ರೂ ಅಪಘಾತ ಆಗ್ತಾನೆ ಇರುತ್ತೆ..ಅಬ್ಬಬ್ಬ ಆ ಮುಂಡಾಜೆದ ರೋಡ್ ಡು ಏರ್ ಯೇ ಪೋಪುನ..ಅನ್ನುವ ಮಾತುಗಳನ್ನು ಕೇಳಿ ಕೇಳಿ, ನಿತ್ಯ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗಳ ನಡುವೆ ಓಡಾಡುತ್ತಾ ಇದ್ದ ಗ್ರಾಮಸ್ಥರು ಆ.10ರಂದು ಒಟ್ಟಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾದರು.

ಹಲವಾರು ಜನರು ಸೇರಿಕೊಂಡು ರಸ್ತೆಯ ಇಕ್ಕೆಲಗಳಲ್ಲಿದ್ದ ಕಲ್ಲು ಹೆಕ್ಕಿ ತಂದು ಬೃಹತ್ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಗ್ರಾಮಸ್ಥರು ವಾಟ್ಸಾಪ್ ನಲ್ಲಿ ಮೆಸೆಜ್ ಮಾಡಿ ಜನರನ್ನು ಸೇರಿಸಿದ್ದರು.

ಈ ಕಾರ್ಯಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಉಪಾಧ್ಯಕ್ಷೆ ಸುಮ ಕೃಷ್ಣನಂದ ಶೆಟ್ಟಿ,ಸದಸ್ಯೆ ರಂಜಿನಿ, ಮುಂಡಾಜೆ ರೋಟರಿ ಸಮುದಾಯ ದಳ ಅಧ್ಯಕ್ಷ ರಾಕೇಶ್ ಕೆ.ಎಸ್., ವಿರಾಟ್, ಹಿಂದೂ ಸೇವಾ ಸಂಘ ಮುಂಡಾಜೆ ಮಾಜಿ ಸಂಚಾಲಕ ಗಿರೀಶ್, ನೂತನ ಸಂಚಾಲಕ ಸಚೀನ್ ರವಿಚಂದ್ರ ನೇಯಲ್ ಉಧ್ಯಮಿ ಹಾಗೂ ಪತ್ರಕರ್ತ ಗುರು ಮುಂಡಾಜೆ, ದಯಾನಂದ ಶೆಟ್ಟಿ, ಬಿ.ಜೆ.ಪಿ ಗ್ರಾಮ ಸಮಿತಿ ಅಧ್ಯಕ್ಷ ರವಿಚಂದ್ರ ಭಂಡಾರಿ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಸೆಬ್ಬಾಟ್ಟಿಯನ್, ಸಿದ್ದಿಕ್ ಸಾಗರ್ , ಉಮರ್ ಹಾಗೂ ಯುವಕರು , ಗ್ರಾಮಸ್ಧರು ಉಪಸ್ಥಿತರಿದ್ದರು.

Exit mobile version