Site icon Suddi Belthangady

ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವಸಂತ ಬಂಗೇರರ ಸ್ಮರಣಾರ್ಥ ವಿಷ್ಣು ಯಾಗ

ಮಡಂತ್ಯಾರು: ಮಾಜಿ ಶಾಸಕ ಕೆ.ವಸಂತ ಬಂಗೇರರ ಸ್ಮರಣಾರ್ಥ ಅವರ ಪತ್ನಿ ಸುಜಿತಾ ಬಂಗೇರ ಮತ್ತು ಮಕ್ಕಳಿಂದ ಆ.8ರಂದು ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವೈದಿಕ ವಿಪ್ರೋತ್ತಮರಿಂದ ಶ್ರೀ ವಿಷ್ಣು ಯಾಗ ನಡೆಯಿತು.

ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನೆರವೇರಿತು. ಸುಜಿತಾ ವಿ.ಬಂಗೇರ, ಮಕ್ಕಳಾದ ಪ್ರೀತಿತಾ ಧರ್ಮವಿಜೇತ್, ಬಿನುತಾ, ಮೊಮ್ಮಕ್ಕಳು, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

Exit mobile version