Site icon Suddi Belthangady

ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ನ ಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಕೊಕ್ಕಡ: ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ನ ಸಾರ್ವಜನಿಕ ಸಭೆಯು ಅ.3ರಂದು ನಡೆಯಿತು.

ಸಭೆಯಲ್ಲಿ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ನೈಮಿಷ ಸೌತಡ್ಕ, ಕಾರ್ಯದರ್ಶಿಯಾಗಿ ಶಶಿಧರ ಕೊಕ್ಕಡ, ಕೋಶಾಧಿಕಾರಿಯಾಗಿ ಫಣಿರಾಜ್ ಜೈನ್ ಕೊಕ್ಕಡ ಹಾಗೂ ಟ್ರಸ್ಟಿಗಳಾಗಿ ಶಾಂತಪ್ಪ ಮಡಿವಾಳ, ಪ್ರತಿಮಾ ಪುರುಷೋತ್ತಮ, ರೂಪೇಶ್ ಕುಮಾರ್, ವಿನಯ್ ಕೇಚೋಡಿ, ಕೀರ್ತನ್, ಮುತ್ತಪ್ಪ ಕೊಕ್ಕಡ ಗೌರವ ಸಲಹೆಗಾರರಾಗಿ ಟ್ರಸ್ಟ್ ನ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೃಷ್ಣ ಭಟ್ ಹಿತ್ತಿಲು, ಈಶ್ವರ ಭಟ್ ಹಿತ್ತಿಲು, ಡಾ|ಗಣೇಶ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಹಾಗೂ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು.

Exit mobile version