Site icon Suddi Belthangady

ಡಿಪಿ ಜೈನ್ ಕಂಪೆನಿ ಕಾರ್ಮಿಕ ಆತ್ಮಹತ್ಯೆಗೆ ಯತ್ನ- ಆಸ್ಪತ್ರೆಗೆ ದಾಖಲು-ಸಂಬಳದ ಸಮಸ್ಯೆಯೋ ಕೌಟುಂಬಿಕ ಕಾರಣವೋ

ರೇಷ್ಮೆರೋಡ್‌: ಪುಂಜಾಲಕಟ್ಟೆ ಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆ ಪಡೆದಿರುವ ಡಿಪಿ ಜೈನ್ ಕಂಪೆನಿ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ ಅನ್ನುವ ಸುದ್ದಿಯ ನಡುವೆ ಇಂದು ಆ.06ರಂದು ಒಬ್ಬ ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿದೆ.

ಬೇರೆ ಸೈಟ್ ನಿಂದ ಇಲ್ಲಿಗೆ ವರ್ಗಾವಣೆಗೊಂಡಿರುವ ಕಾರ್ಮಿಕ ಪ್ರಮೋದ್ ಜಾಡೆ(31ವ) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನಿಗೆ 25000/- ಸಂಬಳಕ್ಕಿಂತ ಕಡಿಮೆಯಿದ್ದು ಆತನಿಗೆ ಒಂದು ತಿಂಗಳ ಸಂಬಳ ಬಾಕಿಯಿದೆ. ಇತ್ತೀಚೆಗೆ ತಂದೆ ಸಾವನ್ನಪ್ಪಿದ್ದು, ಕೌಟುಂಬಿಕ ಸಮಸ್ಯೆಯೂ ಆತನಿಗೆ ಇದೆ ಎನ್ನಲಾಗಿದ್ದು ಆತ್ಮಹತ್ಯೆ ಯತ್ನಕ್ಕೆ ಸಂಬಳದ ಸಮಸ್ಯೆಯೋ ಕೌಟುಂಬಿಕ ಕಾರಣವೋ ಅನ್ನುವುದು ತಿಳಿದು ಬರಬೇಕಿದೆ.

Exit mobile version