Site icon Suddi Belthangady

ಬಡಗಕಾರಂದೂರು: ಸ.ಉ.ಪ್ರಾ. ಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ರಚನೆ

ಬಡಗಕಾರಂದೂರು: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ರಚನೆ ನಡೆಯಿತು.

ಅಧ್ಯಕ್ಷರಾಗಿ ಶಶಿಕಾಂತ್ ನಾಯಕ್, ಉಪಾಧ್ಯಕ್ಷರಾಗಿ ಐಶ್ವರ್ಯ ಸರ್ವಾನುಮತದಿಂದ ಆಯ್ಕೆಯಾದರು.ಸಮಿತಿಯ ಸದಸ್ಯರಾಗಿ ಸುಜಾತಾ ಜೈನ್, ಜಮೀಳಾ, ಪವನ್ ಕುಮಾರ್, ಸಂದೀಪ್ ಎಸ್ ನೀರಲ್ಕೆ, ವೇದಾವತಿ, ಸಂಧ್ಯಾ, ಆನಂದ ಪೂಜಾರಿ ನೀರಲ್ಕೆ, ಲೀಲಾವತಿ, ಗಿರಿಜಾ, ಸೋನಿಯಾ, ಸಂತೋಷ್ ನಿನ್ನಿಕಲ್ಲು, ಜಗನ್ನಾಥ, ಶೇಖರ್, ಸದಾಶಿವ, ಪ್ರಭಾಕರ ನಾಯಕ್, ರೂಪಾ ರವರು ಆಯ್ಕೆಯಾದರು.

ರಚನಾ ಸಭೆಯಲ್ಲಿ ಸಿಆರ್ ಪಿ ರಾಜೇಶ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ರಾವ್, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ರವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಬಾಪಟ್ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಸರೋಜಾ ವಂದನಾರ್ಪಣೆ ಸಲ್ಲಿಸಿದರು.

Exit mobile version