Site icon Suddi Belthangady

ಬೆಳ್ತಂಗಡಿ ಜೆಸಿಐ ಮಂಜುಶ್ರೀ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ಟಾಪ್ 10ನೇ ಸ್ಥಾನ

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಸಮ್ಮೇಳನವು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಸ್ತಕ ವರ್ಷದಲ್ಲಿ ಜೆಸಿಐ ಭಾರತಕ್ಕೆ ಸಲ್ಲಿಸಿದ ಸದಸ್ಯತ್ವ ಶುಲ್ಕ ಮತ್ತು ಜೆಸಿಐ ಭಾರತದ ಫೌಂಡೇಶನ್ ಗೆ ನೀಡಿದ ದೇಣಿಗೆ ಹಾಗೂ ಹೊಸ ಸದಸ್ಯರ ಸೇರ್ಪಡೆ ಮತ್ತು ನಡೆಸಿದ ಓರಿಯೆಂಟಷನ್ ಕಾರ್ಯಕ್ರಮವನ್ನು ಆದರಿಸಿ ಕೊಡ ಮಾಡುವ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಪ್ರಶಸ್ತಿಯಲ್ಲಿ 10 ನೇ ಸ್ಥಾನದ ಪ್ರಶಸ್ತಿಗೆ ಭಾಜನವಾಗಿದೆ. ವಲಯಧ್ಯಕ್ಷ ಗಿರೀಶ್ ಎಸ್.ಪಿ ಯವರಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್.ಡಿ. ಬಳಂಜ ಸದಸ್ಯರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಘಟಕದ ನಿಕಟಪೂರ್ವಧ್ಯಕ್ಷ ಶಂಕರ್ ರಾವ್, ಪೂರ್ವ ಅಧ್ಯಕ್ಷರುಗಳಾದ ಸಂತೋಷ್ ಪಿ.ಕೋಟ್ಯಾನ್, ಪ್ರಶಾಂತ್ಲಾಯಿಲ, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಚಂದ್ರಹಾಸ್, ಶೈಲೇಶ್, ಸಂಯೋಜಕ ರಜತ್, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ಅಮೃತಾ ಎಸ್.ಕೋಟ್ಯಾನ್ ಭಾಗವಹಿಸಿದರು.

Exit mobile version