Site icon Suddi Belthangady

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿದ ಗಮ್ಮತ್

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ತುಳು ಒಕ್ಕೂಟದ ಅಧ್ಯಕ್ಷ ಆರ್ ಜೆ ಶೈಲೇಶ್ ರವರು ಆಗಮಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಒಕ್ಕೂಟದ ಅಧ್ಯಕ್ಷರಾದ ಆರ್ ಜೆ ಶೈಲೇಶ್ ರವರು ಮಾತನಾಡಿ ಆಟಿ ತಿಂಗಳ ಮಹತ್ವದ ಬಗ್ಗೆ ಹಾಗೂ ಮೊತ್ತ ಮೊದಲು ದೇಶವಿದೇಶಗಳಲ್ಲಿ ತುಳು ಅಕಾಡಮಿಗೆ ಚಾಲನೆಯನ್ನು ನೀಡಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಸ್ಮರಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಮಕ್ಕಳು ತುಳು ಗಾದೆ ಪಾದ್ದಾನ, ಹಳೆ ವಸ್ತುಗಳು ,ನೃತ್ಯ , ಆಟಿ ತಿಂಗಳ ಉಪಾಹಾರ ಇತ್ಯಾದಿಗಳ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ರಕ್ಷಣ್ ಶೆಟ್ಟಿ ನಿರೂಪಿಸಿ, ಸಿಂಚನ ಸ್ವಾಗತಿಸಿ, ಕುಮಾರಿ ನಿಧಿ ಧನ್ಯವಾದಿಸಿದರು.

Exit mobile version