Site icon Suddi Belthangady

ಕೊಯ್ಯೂರು: ಮಾಧವ ಶೆಟ್ಟಿಗಾ‌ರ್ ರವರ ಮನೆ ಬಳಿ ಗುಡ್ಡ ಕುಸಿತ- ಸ್ಥಳಕ್ಕೆ ಗ್ರಾ.ಪಂ ಪಿಡಿಒ ಭೇಟಿ ಪರಿಶೀಲನೆ

ಕೊಯ್ಯೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಕೊಯ್ಯೂರು ಗ್ರಾಮದ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ದಿ.ಅಚ್ಚುತ ಶೆಟ್ಟಿಗಾರ್ ಅವರ ಪುತ್ರ ಮಾಧವ ಶೆಟ್ಟಿಗಾರ್ ಅವರ ಮನೆ ಬಳಿ ಗುಡ್ಡ ಕುಸಿತಕ್ಕೊಳಗಾಗಿ ಮನೆಗೆ ಅಪಾಯ ಎದುರಾಗಿದೆ.

ಮನೆಯ ಸಮೀಪದ ಗುಡ್ಡ ಕುಸಿತಕ್ಕೊಳಗಾಗಿ ಮಣ್ಣು ಮನೆಯ ಸ್ಟೇಪ್‌ನ ಮೆಟ್ಟಿಲು ತನಕ ಬಂದಿದೆ.

ಅವರು ಮನೆ ನಿರ್ಮಿಸಿ ಕೇವಲ ಎರಡು ತಿಂಗಳಷ್ಟೇ ಕಳೆದಿದೆ.

Exit mobile version