Site icon Suddi Belthangady

ಬೆಳ್ತಂಗಡಿ: ಮೈರೋಳ್ತಡ್ಕದಲ್ಲಿ ಗುಡ್ಡ ಕುಸಿದು ಕಂಗಾಲಾದ ರೈತ

ಬೆಳ್ತಂಗಡಿ: ಬಂದಾರು ಗ್ರಾಮದ ಮೈರೋಳ್ತಡ್ಕ ಪಟ್ಲ ಎಂಬಲ್ಲಿ ಸಂಜೀವ ರೈ ಎಂಬವರ ತೋಟದ ಬಳಿ ಇರುವ ಬೃಹತ್ ಗುಡ್ಡವೊಂದು ಜರಿದು ಬಿದ್ದು ಪಕ್ಕದ ತೋಡಿಗೆ ಅಡ್ಡಲಾಗಿ ಬಿದ್ದಿದ್ದು ತೋಡಿನ ಹರಿವನ್ನು ಸಂಪೂರ್ಣ ತಡೆಯಲಾಗಿದೆ.

ತೋಡಿನಿಂದ ಹರಿಯುತ್ತಿದ್ದ ನೀರು ಸಂಪೂರ್ಣವಾಗಿ ಅವರ ಅಡಿಕೆ ತೋಟದಲ್ಲಿ ತುಂಬಿರುವ ದೃಶ್ಯವನ್ನು ಕಾಣಬಹುದು. ಗುಡ್ಡ ನಿರಂತರವಾಗಿ ಕುಸಿಯುತ್ತಲೆ ಇರುವ ಕಾರಣ ಅಲ್ಲಿಗೆ ಹೋಗಿ ತೋಡಿನ ನೀರನ್ನು ಬಿಡಿಸಲು ಅಸಹಾಯಕ ಪರಿಸ್ಥಿತಿ ತಲೆದೋರಿದೆ.

ಸ್ಥಳಿಯ ಪಂಚಾಯತ್ ಮಟ್ಟದಲ್ಲಿ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಬಿಟ್ಟರೆ ಈ ಅಸಹಾಯಕ ಪರಿಸ್ಥಿತಿ ಕೇಳುವವರೆ ಇಲ್ಲದಾಗಿದೆ. ವಯಸ್ಸಾದ ತನ್ನ ಹೆಂಡತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರನ್ನು ಚಿಕಿತ್ಸೆಗೂ ಕರೆದುಕೊಂಡು ಹೋಗಲು ಆಗದ ಅಸಹಾಯಕತೆ ಒಂದೆಡೆ ಆದರೆ ಇತ್ತ ಕಣ್ಣೆದುರಲ್ಲೆ ತೋಟ ಮುಳುಗಿದರೂ ಏನು ಮಾಡಲಾಗದೆ ಈ ಬಡ ರೈತ ಕಂಗೆಟ್ಟಿದ್ದಾರೆ.

Exit mobile version