Site icon Suddi Belthangady

ಕಟ್ಟದಬೈಲು ಶಾಲೆಗೆ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಪ್ರದಾನ

ಕಟ್ಟದಬೈಲು: ಕಟ್ಟದಬೈಲು ಶಾಲೆಗೆ ರಾಜ್ಯ ಮಟ್ಟದ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ’ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನ ಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ’ಯನ್ನು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಂಸ್ಥಾಪಕರಾದ ಸದ್ಗುರು ಮಧುಸೂದನ್ ಸಾಯಿ ರವರು ಶಾಲಾ ಮುಖ್ಯೋಪಾಧ್ಯಾಯ ಎಡ್ವರ್ಡ್ ಡಿ’ಸೋಜ ರವರಿಗೆ ಪ್ರದಾನ ಮಾಡಿದರು.

ಪ್ರಶಸ್ತಿಯು ಪ್ರಶಸ್ತಿಪತ್ರ, ರೂ.10,000/- ನಗದು, ಶಾಲಾ ವಾಚನಾಲಯಕ್ಕೆ ರೂ.8000/- ಬೆಲೆಯ ಮಾನವೀಯ ಮೌಲ್ಯವನ್ನು ಬೆಳೆಸುವ ಪುಸ್ತಕಗಳು, ಶಿಕ್ಷಕರಿಗೆ ಡೈರಿ, ಮುಖ್ಯಶಿಕ್ಷಕರಿಗೆ ಕೈಗಡಿಯಾರ ಹಾಗೂ ವಿದ್ಯಾರ್ಥಿ/ನಿಯರಿಗೆ ಸಿಹಿತಿಂಡಿಗಳನ್ನು ಒಳಗೊಂಡಿದೆ.

Exit mobile version