Site icon Suddi Belthangady

ಸುಲ್ಕೇರಿಮೊಗ್ರು: ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ನಿಂದ ಸ್ಥಳ ಪರಿಶೀಲನೆ

ಸುಲ್ಕೇರಿಮೊಗ್ರು: ಗ್ರಾಮದಲ್ಲಿ ಸಂಭವಿಸಿದ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಆ.01ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ನಾಯ್ಕ್ ಯವರು ಹಾಗೂ ಸದಸ್ಯೆ ಶಾಂತಿ ಕಿರಣ್ ಹಾಗೂ ಪಿ.ಡಿ.ಓ. ಪೂರ್ಣಿಮಾ.ಜೆ ಹಾಗೂ ವಿಎ ರವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಮಂಜುಳ ದೇವಪ್ಪಮೂಲ್ಯ, ನಾಯಿಜೆ ಚಂದಯ ಮಡಿವಾಳ ಮನೆಗೆ, ಮಹಿಷಮರ್ದಿನಿ ದೇವಸ್ಥಾನದ ರಸ್ತೆ, ಹೊಕ್ಕಳ ರಸ್ತೆ, ಪಡುಬೈಲು ರಸ್ತೆ, ಪಲ್ಕೆ ಕೊಚೋಟ್ಟು ರಸ್ತೆಯಲ್ಲಿ ಬಿದ್ದ ಮಣ್ಣುಗಳನ್ನು ತೆರವುಗೊಳಿಸಲಾಯಿತು.

ಕೊಳಕೆ ಎಂಬಲ್ಲಿ ಆಣೆಕಟ್ಟದಲ್ಲಿ ಮರಗಳು ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು.

ಕಲ್ಪಿಲ ಎಂಬಲ್ಲಿ ಸುಲ್ಕೇರಿಮೊಗ್ರು ಗ್ರಾಮಕ್ಕೆ ಸಂಬಂಧ ಪಡುವ ಮನೆಗೆ ಬರೆ ಜರಿದು ಹಾನಿಯಾಗಿದನ್ನು ಪರಿಶೀಲನೆ ನಡೆಸಿದರು.

Exit mobile version