Site icon Suddi Belthangady

ಪಣಕಜೆಯ ಅರ್ಕಜೆ ಎಂಬಲ್ಲಿ ಮನೆಗೆ ಗುಡ್ಡ ಕುಸಿತ- ಮಡಂತ್ಯಾರು ಶೌರ್ಯ ಘಟಕದಿಂದ ತೆರವು ಕಾರ್ಯ

ಪಣಕಜೆ: ಪಣಕಜೆಯ ಅರ್ಕಜೆ ಎಂಬಲ್ಲಿ ಕುಸುಮಾವತಿ ಎಂಬುವವರ ಮನೆಗೆ ಗುಡ್ಡ ಕುಸಿದು ಮನೆಯ ಮುಂಭಾಗ ಮಣ್ಣಿನಿಂದ ಸಂಪೂರ್ಣ ಮುಚ್ಚಿ ಹೋಗಿತ್ತು.ವಿಷಯ ತಿಳಿದು ತಕ್ಷಣ ಸ್ಪಂದಿಸಿದ ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಸಹಕರಿಸಿದರು.

ದೊಡ್ಡ ಮಟ್ಟದ ಮಣ್ಣು ಕುಸಿದು ಭಾರೀ ಪ್ರಮಾಣದ ಮಣ್ಣು ತುಂಬಿದ್ದು, ಸಂಪೂರ್ಣ ತೆರವು ಅಸಾಧ್ಯ ವಾಗಿರುತ್ತದೆ.ತಾತ್ಕಾಲಿಕವಾಗಿ ಮುಂಭಾಗದ ಮಣ್ಣು ತೆರವುಗೊಳಿಸಲಾಯಿತು.ವಲಯ ಮೇಲ್ವಿಚಾರಕಿ ಯಶೋಧರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೇವಾಪ್ರತಿನಿಧಿ ಜಾನಕಿ, ಮಡಂತ್ಯಾರು ವಲಯ ಶೌರ್ಯ ಸಂಯೋಜಕಿ ಹರಿಣಾಕ್ಷಿ, ಘಟಕ ಪ್ರತಿನಿಧಿ ಬಾಲಕೃಷ್ಣ ಹಾರಬೆ,ಸ್ವಯಂ ಸೇವಕರಾದ ಭರತ್ ಕುಮಾರ್, ದಯಾನಂದ ಹಚ್ಚಬೆ, ಯೋಗೀಶ್ ಕೊಡ್ಲಕ್ಕೆ, ಶೋಭಾ, ಬೇಬಿ ವಡ್ಡ, ಸತೀಶ್ ಆಚಾರ್ಯ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Exit mobile version