Site icon Suddi Belthangady

ಬೆಳಾಲು: ಶ್ರೀ ಧ.ಮ. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ ಜಯರಾಮ ಮಯ್ಯ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಕೊಕ್ರಾಡಿ ಆ.011ರಂದು ಅಧಿಕಾರ ಸ್ವೀಕರಿಸಿದರು.

ಇಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಕೃಷ್ಣ ಭಟ್ ಚೊಕ್ಕಾಡಿ ಜು.31ರಂದು ವಯೋ ನಿವೃತ್ತರಾಗಿದ್ದರು.ಜಯರಾಮ ಮಯ್ಯ ಸಾವ್ಯ ಕೊಕ್ರಾಡಿ ನಿವಾಸಿಯಾಗಿದ್ದು ಕೊಕ್ರಾಡಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ವೇಣೂರು ಸರಕಾರಿ ಕಾಲೇಜಿನಲ್ಲಿಪದವಿ ಪೂರ್ವ, ಮೂಡಬಿದ್ರೆ ಧವಳ ಮಹಾವಿದ್ಯಾಲಯದಲ್ಲಿ ಪದವಿ, ಉಡುಪಿ ಡಾ.ಟಿ.ಎಂ.ಎ ಪೈ ಶಿಕ್ಷಕ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್ ಶಿಕ್ಷಣ ಮುಗಿಸಿ 2002ರಲ್ಲಿ ಕೊಕ್ರಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇರಿ, 2003 ಜುಲೈಯಲ್ಲಿ ಬೆಳಾಲು ಶ್ರೀ ಧ.ಮ. ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಸಹಾಯಕ ಮತ್ತು ಸಮಾಜ ವಿಜ್ಞಾನ ಬೋಧಕನಾಗಿ ವೃತ್ತಿ ಜೀವನದ ಪಾದಾರ್ಪಣೆ. 2008ರಲ್ಲಿ ಆರು ತಿಂಗಳ ಕಾಲ ಎಸ್.ಡಿ.ಎಂ ಸೆಕೆಂಡರಿ ಶಾಲೆ, ಉಜಿರೆ ಇಲ್ಲಿ ಸೇವೆ, 2008ರಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಹದಿನಾರು ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕನಿಗೆ ಸೇವೆ ಸಲ್ಲಿಸಿದ್ದರು.

Exit mobile version