Site icon Suddi Belthangady

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಸತೀಶ್ ಹೊಳ್ಳ ಸೇವಾ ನಿವೃತ್ತಿ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳ ಜು.31ರಂದು ಸೇವಾ ನಿವೃತ್ತಿ ಹೊಂದಿದರು.

ಉಜಿರೆ ಗ್ರಾಮದ ನಡಿಬೆಟ್ಟು ನಿವಾಸಿ ನಿರುಪಮ ನಾರಾಯಣ ಹೊಳ್ಳ ದಂಪತಿಯ ಪ್ರಥಮ ಪುತ್ರರಾದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಉಜಿರೆ ಶ್ರೀ ಧ.ಮ. ಶಾಲೆ ಯಲ್ಲಿ ಮುಗಿಸಿ,1982 ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟಗಾರರಾಗಿ ಕೆಲಸಕ್ಕೆ ಸೇರಿ ನಂತರ ಗುಮಾಸ್ತರಾಗಿ, ಮಾರಾಟ ವ್ಯವಸ್ಥಾಪಕರಾಗಿ ಸಂಘದ ಎಲ್ಲಾ ವಿಭಾಗಗಳಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ.

ನಂತರ 2013ರಿಂದ ಸಂಘದ ಲೆಕ್ಕಿಗರಾಗಿ, 2013ರಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಸ್ತುತ 2021 ಮೇ10 ರಿಂದ ರಿಂದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಸಂಘದಲ್ಲಿ ಒಟ್ಟು ಸುದೀರ್ಘ 42 ವರ್ಷಗಳ ದೀರ್ಘಕಾಲ ಸಂಘದಲ್ಲಿ ಕಾರ್ಯನಿರ್ವಹಿಸಿದರು. ಇವರು ಪತ್ನಿ ನಳಿನಿ ಹೊಳ್ಳ, ಪುತ್ರ ನರೇಶ್, ಪುತ್ರಿ ಶರಣ್ಯ ರೊಂದಿಗೆ ಜೀವನ ನಡೆಸುತ್ತಿದ್ದಾರೆ.

Exit mobile version