Site icon Suddi Belthangady

ಮಡಂತ್ಯಾರು: ಜಯೇಶ್ ಬರೆಟ್ಟೋ ಇವರಿಗೆ ವಲಯದ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿ ಗೌರವ

ಮಡಂತ್ಯಾರು: ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ-ವೈಭವ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೆಸಿಐ ಮಡಂತ್ಯಾರಿನ ಪೂರ್ವ ಅಧ್ಯಕ್ಷರು, ವಲಯದ ಪೂರ್ವ ಉಪಾಧ್ಯಕ್ಷರು, ಮಡಂತ್ಯಾರು ಡ್ರೀಮ್ಸ್ ಡೆಕೊರೇಟರ್ ನ ಮಾಲಕ ಜಯೇಶ ಬರೆಟ್ಟೊ ಇವರಿಗೆ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉದ್ಯೋಗ ಕ್ಷೇತ್ರದಲ್ಲಿ ಸತತ 24 ವರ್ಷಗಳ ಪ್ರಾಮಾಣಿಕ ಕರ್ತವ್ಯವನ್ನು ಗುರುತಿಸಿ ಹಾಗೂ ಶ್ಲಾಘಿಸುವ ಮಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಗಿರೀಶ್ ಎಸ್ ಪಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಜೆಎಸಿ ಛೇರ್ಮನ್ ಜೇಸಿ ಲೋಕೇಶ್ ರೈ, ಮಡಂತ್ಯಾರು ಘಟಕದ ಅಧ್ಯಕ್ಷರಾದ ಜೇಸಿ ವಿಕೇಶ ಮಾನ್ಯ, ಹಾಗೂ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ/ವಲಯಧಿಕಾರಿಯಾದ ಜೇಸಿ ಅಶೋಕ್ ಹಾಗೂ ವಲಯ ನಿರ್ದೇಶಕರಾದ ಜೆಸಿ ಭರತ್ ಶೆಟ್ಟಿ, ಪೂರ್ವ ಅಧ್ಯಕ್ಷರಾದ ಜೆಸಿ ಮೇಧಾವಿ, ಜೆಸಿ ರಾಧಾಕೃಷ್ಣ ಬಂಟ್ವಾಳ್, ಜೆಸಿ ರಾಜೇಶ್ ಪುಳಿಮಜಲ್, ಜೆಸಿ ಶ್ರೀಧರ್ ಆಚಾರ್ಯ, ಜೆಸಿ ಪ್ರಭಾತ್ ಜೈನ್ ಜೆಸಿ ತೃಪ್ತಿ ವಿಕೆಶ್, ಜೆಸಿ ರಮ್ಯಾ ಮೇಧಾವಿ, ಜೆಸಿ ಡಿಗ್ನ ಮತ್ತಿತರರು ಉಪಸ್ಥಿತರಿದ್ದರು.

Exit mobile version