Site icon Suddi Belthangady

ತಾಲೂಕಿನಲ್ಲಿ ಭಾರಿ ಮಳೆ: ವೇಣೂರಿನಲ್ಲಿ ಧರೆ ಕುಸಿತ- ಹಲವು ವಾಹನಗಳಿಗೆ ಹಾನಿ

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜೊತೆಗೆ ಘಟ್ಟದ ಮೇಲಿನ ತಾಲೂಕುಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ವೇಣೂರಿನ ಪಂಚಾಯತ್ ಎದುರಿನಲ್ಲಿರುವ ಧರೆ ಜು.30ರಂದು ಮಧ್ಯಾಹ್ನ ಸುಮಾರಿಗೆ ಕುಸಿತ ಸಂಭವಿಸಿದೆ.

ವೇಣೂರಿನಲ್ಲಿ ಹೆಚ್ಚಿನವರು ಕಾರು ಬೈಕುಗಳನ್ನು ಈ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದರು. ಜು.30ರಂದು ಕೂಡ ಕೆಲವು ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಧರೆ ಕುಸಿಯುವ ಸಂದರ್ಭದಲ್ಲಿ ಕೆಲವು ವಾಹನಗಳು ಮಾತ್ರ ಇದ್ದವು.ವಾಹನಗಳ ಮೇಲೆ ಕಲ್ಲು ಮಣ್ಣು ಬೀಳದೆ, ವಾಹನಗಳನ್ನು ದೂಡಿಕೊಂಡೇ ಧರೆ ಕುಸಿದಿದೆ.ಈಗಾಗಲೇ ಪಂಚಾಯತ್ ಆಡಳಿತ ವರ್ಗ ಪರಿಶೀಲನೆ ನಡೆಸಿದ್ದಾರೆ.

Exit mobile version