Site icon Suddi Belthangady

ಕೆಎಸ್‌ಎಮ್‌ಸಿಎ ಸಂಘಟನೆಗೆ ನೂತನ ನಿರ್ದೇಶಕರಾಗಿ ರೆ.ಫಾ.ಆದರ್ಶ್ ಜೋಸೆಫ್ ಪುದಿಯೆಡತ್ ನೇಮಕ

ಬೆಳ್ತಂಗಡಿ: ಇಲ್ಲಿನ ಧರ್ಮಪ್ರಾಂತ್ಯದ ಸಂಘಟನೆಯಾದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್, (ಕೆ.ಎಸ್.ಎಂ.ಸಿ.ಎ)ಇದರ ನೂತನ ನಿರ್ದೇಶಕರಾಗಿ ರೆ.ಫಾ.ಆದರ್ಶ್ ಜೋಸೆಫ್ ಪುತಿಯೇಡತ್ ಇವರನ್ನು ಬೆಳ್ತಂಗಡಿ ಧರ್ಮಧ್ಯಕ್ಷ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಇವರು ನೇಮಕ ಮಾಡಿದ್ದಾರೆ.

ಅತ್ಯಂತ ಉತ್ಸಾಹಿ ಸಂಘಟಕರಾದ ಫಾ. ಆದರ್ಶ್ ಅವರು ಕೆ.ಎಸ್.ಎಂ.ಸಿ.ಎ ನಿರ್ದೇಶಕರಾಗಿ ನೇಮಕವಾಗಿರುವುದರಿಂದ ಸಂಘಟನೆಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಹಾಗೂ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಗುರುಗಳ ನೇಮಕಾತಿಯನ್ನು ಸ್ವಾಗತ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ನೂತನ ನಿರ್ದೇಶಕ ಫಾ.ಆದರ್ಶ್ ಅವರು ಸದ್ಯ ಗುತ್ತಿಗಾರು, ನೆಟ್ಟಣ ಧರ್ಮ ಕೇಂದ್ರಗಳ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version