Site icon Suddi Belthangady

ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಉಮೇಶ್ ಮುಂಡತ್ತೋಡಿರವರ ಮನೆಗೆ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಎಸ್.ಸಿ ಮೋರ್ಚಾ ಪದಾಧಿಕಾರಿಗಳು ಭೇಟಿ

ಉಜಿರೆ: ಇತ್ತೀಚೆಗೆ ಭಾರಿ ಮಳೆಗೆ ಉಜಿರೆ ಗ್ರಾಮದ ಉಮೇಶ್ ಮುಂಡತ್ತೋಡಿಯವರ ಮನೆ ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿತ್ತು.

ತೀರ ಬಡ ಕುಟುಂಬದ ಈ ಮನೆಗೆ ಬೆಳ್ತಂಗಡಿ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಈಶ್ವರ್ ಬೈರ, ಜಿಲ್ಲಾ ಉಪಾಧ್ಯಕ್ಷ ರಾಘವ ಕಲ್ಮಂಜ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಂದ್ರಕಲಾ, ಎಸ್.ಸಿ ಮೋರ್ಚಾ ಉಪಾಧ್ಯಕ್ಷ ರಾಮು ಪಡಂಗಡಿ, ಪ್ರಭಾರಿ ಸದಾಶಿವ ನೆಲ್ಲಿಕಾರ್, ಜಿಲ್ಲಾ ಕಾರ್ಯದರ್ಶಿ ವಿನಯ್ ಸಾಲ್ಯಾನ್, ಬೆಳ್ತಂಗಡಿ ಎಸ್.ಸಿ ಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ಪ್ರೇಮಚಂದ್ರ, ಲಕ್ಷ್ಮಣ ಜಿ.ಎಸ್ ಭೇಟಿ ನೀಡಿದರು.

ಸದ್ಯ ಪಕ್ಕದ ಮನೆಯಲ್ಲಿ ಅಶ್ರಯ ಪಡೆದಿರುವ ಈ ಬಡ ಕುಟುಂಬಕೆ ಎಸ್.ಸಿ ಮೋರ್ಚಾದ ಅಧ್ಯಕ್ಷ ಈಶ್ವರ ಬೈರ ಇವರ ನೇತೃತ್ವದಲ್ಲಿ 50 ಕೆ.ಜಿ ಅಕ್ಕಿ ನೀಡಲಾಯಿತು.

Exit mobile version