Site icon Suddi Belthangady

ಕರ್ನಾಟಕ ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ರಾಜೇಂದ್ರ ರವರು ಸೌತಡ್ಕ ಕ್ಷೇತ್ರಕ್ಕೆ ಭೇಟಿ

ಕೊಕ್ಕಡ: ಕರ್ನಾಟಕ ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ರಾಜೇಂದ್ರ ರವರು ಸೌತಡ್ಕ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಸಹಕಾರಿ ಸಂಘದ ಉಪನಿಬಂಧಕರಾದ ರಮೇಶ್ ಕುಮಾರ್, ಪುತ್ತೂರು ಸಹಕಾರಿ ಸಂಘದ ಸಹಾಯಕ ನಿಬಂಧಕರಾದ ರಘು ಚಿಕ್ಕಮಗಳೂರು ಜಿಲ್ಲೆಯ ಸಹಾಯಕ ನಿಬಂಧಕರಾದ ಸುಕನ್ಯಾ ರಾವ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರು, ಪ್ರಾ.ಕೃ.ಪ.ಸ.ಸಂ.ಕೊಕ್ಕಡ ಇದರ ಅಧ್ಯಕ್ಷರು ಆಗಿರುವ ಕುಶಾಲಪ್ಪ ಗೌಡ ಪೂವಾಜೆ, ಪ್ರಾ.ಕೃ.ಪ.ಸ.ಸಂ.ಕೊಕ್ಕಡ ಇದರ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನವೀನ್ ರವರು ಉಪಸ್ಥಿತರಿದ್ದರು.

Exit mobile version