Site icon Suddi Belthangady

ಮದ್ದಡ್ಕ ಶ್ರೀ ರಾಮ ಭಜನಾ ಮಂದಿರ ಇದರ ವಾರ್ಷಿಕ ಸಭೆ- ನೂತನ ಅಧ್ಯಕ್ಷರಾಗಿ ಮನೋಹರ ಕೇದಳಿಕೆ, ಪ್ರ.ಕಾರ್ಯದರ್ಶಿಯಾಗಿ ಪ್ರೀತಮ್ ಆಚಾರ್ಯ, ಕೋಶಾಧಿಕಾರಿಯಾಗಿ ಸಚಿನ್ ವರ್ಧನ್ ನೇಮಕ

ಕುವೆಟ್ಟು: ಮದ್ದಡ್ಕ ಶ್ರೀ ರಾಮ ಭಜನಾ ಮಂದಿರ ಇದರ ವಾರ್ಷಿಕ ಸಭೆಯು ಅದ್ಯಕ್ಷರಾದ ರಾಜ್ ಪ್ರಕಾಶ್ ಪಡ್ಡೈಲು ಇವರ ಅಧ್ಯಕ್ಷತೆಯಲ್ಲಿ ಜು.26ರಂದು ಭಜನಾ ಮಂದಿರದಲ್ಲಿ ಜರಗಿತು.

ಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಗೌರವಾಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ನೂತನ ಅಧ್ಯಕ್ಷರಾಗಿ ಮನೋಹರ ಕೇದಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಮ್ ಆಚಾರ್ಯ ಮದ್ದಡ್ಕ, ಕೋಶಾಧಿಕಾರಿಯಾಗಿ ಸಚಿನ್ ವರ್ಧನ್ ಮದ್ದಡ್ಕ, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್ಯ ಮದ್ದಡ್ಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರು ಮಾತನಾಡಿ ಮುಂದಿನ ದಿನಗಳಲ್ಲಿ ನಡೆಯುವಂತಹ ಧಾರ್ಮಿಕ ಹಬ್ಬಗಳನ್ನು ಭಜನಾ ಕಾರ್ಯಕ್ರಮ ಯಶಶ್ವಿಯಾಗಿ ನಡೆಸಲು ಎಲ್ಲಾ ಸದಸ್ಯರ ಸಹಕಾರ ಕೋರಿದರು ಸಭೆಯಲ್ಲಿ ಶೇಖರ್ ಶೆಟ್ಟಿ ಉಪ್ಪಡ್ಕ, ಜಯರಾಮ್ ಶೆಟ್ಟಿ ಕಿನ್ನಿಗೋಳಿ, ಉಮೇಶ್ ಕುಮಾರ್ (ಮನು)ಮದ್ದಡ್ಕ, ಶಿವರಾಮ ಶೆಟ್ಟಿ ಉಪ್ಪಡ್ಕ, ಹರೀಶ್ ಬಪ್ಪಳಿಕೆ, ಯಶೋಧರ ಶೆಟ್ಟಿ ಅರ್ಕಜೆ, ಸುರೇಶ್ ಕುಲಾಲ್ ಓಡೀಲು ಪುನಿತ್ ಶೆಟ್ಟಿ, ಅನುರಾಗ್ ಮದ್ದಡ್ಕ, ಶೈಲೇಶ್ ಪೂಜಾರಿ ಭದ್ರಕಜೆ ಉಪಸ್ಥಿತರಿದ್ದರು.

Exit mobile version