Site icon Suddi Belthangady

ಜೋರಾಗಿ ಬೀಸಿದ ಗಾಳಿ ಮಳೆಗೆ ಮಾಲಾಡಿ ಹಾಗೂ ಸೋಣಂದೂರು ಗ್ರಾಮಗಳಲ್ಲಿ ಅಪಾರ ಹಾನಿ

ಬೆಳ್ತಂಗಡಿ: ಮಾಲಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ಮಾಲಾಡಿ ಹಾಗೂ ಸೋಣಂದೂರು ಗ್ರಾಮಗಳಲ್ಲಿ ಜೋರಾಗಿ ಬೀಸಿದ ಗಾಳಿ ಮಳೆಗೆ ಮಾಲಾಡಿ ಶಾಲೆ ಹಾಗೂ ಹಲವು ಮನೆಗಳಿಗೆ ಮರ ಬಿದ್ದು ಅಪಾರ ಹಾನಿಯಾಗಿರುತ್ತದೆ.

ಅಬ್ದುಲ್ ಮಜೀದ್ ಕೊರಾಜೆ, ಮುಮ್ತಾಜ್ ಸಾಹೇಜ್ ಅರ್ತಿಲ, ಜಾನಕಿ ಗೋಪಾಲ ಶೆಟ್ಟಿ, ಫೆಲಿಕ್ಸ್, ಡಿ’ಕೋಸ್ತಾ, ಗೀತಾ ವಿಜಯ ಸಾಲ್ಯಾನ್ ಪಣಕಜೆ, ರಾಜೀವಿ ಕೂಸಪ್ಪ ಮುಲ್ಯ, ಚಂದ್ರಶೇಖರ ಕೃಷ್ಣ ನಗರ, ಕಮರುನ್ನೀಸ ಅರ್ತಿಲ, ಚಿಕ್ಕಯ ಮೂಲ್ಯ ಹುಪ್ಪ, ಶಾಂತಿದಾಮ ಅರ್ತಿಲ, ಚಲ್ಲಿ, ಜನಾರ್ದನ ಶೆಟ್ಟಿ ಕೊಲ್ಪೆದಬೈಲು, ಲ್ಯಾನ್ಸಿ ಡಿ’ಸೋಜ ಇವರ ಮನೆಗೆ ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಸದಸ್ಯರಾದ ಬೇಬಿ ಸುವರ್ಣ, ಉಮೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಗ್ರಾಮ ಸಹಾಯಕ ಗುಣಕರ ಭೇಟಿ ನೀಡಿದ್ದಾರೆ.

Exit mobile version