Site icon Suddi Belthangady

ನೆರಿಯ ಕಾಟಾಜೆ ರಸ್ತೆಯಲ್ಲಿ ಮುಳುಗಿದ ಕಾರು-ಅಣಿಯೂರು ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಳ- ಭಯದಲ್ಲೇ ರಾತ್ರಿ ಕಳೆದ ಗ್ರಾಮಸ್ಥರು

ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಮತ್ತು ಗಾಳಿಯಿಂದಾಗಿ ವ್ಯಾಪಕ ಹಾನಿಯಾಗಿವೆ. ಜುಲೈ 26ರಂದು ರಾತ್ರಿ ಅಣಿಯೂರು ನದಿಯಲ್ಲಿ ನೀರಿನ ಮಟ್ಟ ಏಕಾಏಕ ಏರಿಕೆ ಕಂಡಿತ್ತು. ಈ ವೇಳೆ, ಕಾಟಾಜೆ ರಸ್ತೆಗೆ ನೀರು ಪ್ರವೇಶಿಸಿ ಕಾರೊಂದು ಮುಳುಗಿರುವ ಘಟನೆ ರಾತ್ರಿ ನಡೆದಿದೆ.

ಏಕಾಏಕಿ ರಸ್ತೆಗೆ ನೀರು ಬಂದಿದ್ದರಿಂದ ಭಯಗೊಂಡು ತಕ್ಷಣ ಕಾರಿನಲ್ಲಿ ಇದ್ದವರು ಬೊಬ್ಬೆ ಹೊಡೆದಿದ್ದಾರೆ.ಇದನ್ನು ಗಮನಿಸಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಸಹಾಯಹಸ್ತ ಚಾಚಿದ್ದು, ಕಾರಿನಲ್ಲಿದ್ದವರನ್ನು ಬಚಾವ್ ಮಾಡಿದ್ದಾರೆ.

ರಾತ್ರಿ ವೇಳೆ ಸ್ಧಳಕ್ಕೆ ಗ್ರಾ ಪಂ. ಸದಸ್ಯ ಸಚಿನ್ ಕೆ.ಆರ್. ಭೇಟಿ ನೀಡಿದ್ದರು.

Exit mobile version