Site icon Suddi Belthangady

ನೇತ್ರಾವತಿ ಸಂಜೀವಿನಿ ತಾಲೂಕು ಒಕ್ಕೂಟದ ಮಾಸಿಕ ಸಭೆ

ಬೆಳ್ತಂಗಡಿ: ನೇತ್ರಾವತಿ ಸಂಜೀವಿನಿ ತಾಲೂಕು ಒಕ್ಕೂಟದ ಮಾಸಿಕ ಸಭೆ ಜು.22ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ನೇತ್ರಾವತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಧುರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮಾರ್ಗದರ್ಶನ ನೀಡಿದರು.

ಟಿಪಿಎಮ್ ಪ್ರತಿಮಾ, ಸ್ವಚ್ಚತಾ ಸಂಕೀರ್ಣ ಘಟಕದ ಪವನ್, ಎನ್‌ಆರ್‌ಎಂಎಲ್‌ನ ನಿತೀಶ್, ಸ್ವಸ್ತಿಕ್ ವಿನೋದ್ ಹಾಗೂ ವೀಣಾಶ್ರಿ ಸಹಿತ ವಿವಿಧ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಲೂಕು ಮೇಲ್ವಿಚಾರಕ ಜಯಾನಂದ ಸ್ವಾಗತಿಸಿದರು. ಕಾರ್ಯದರ್ಶಿ ಗಿರಿಜಾ ಕೆದಿಲಾಯ ವಂದಿಸಿದರು.

Exit mobile version