Site icon Suddi Belthangady

ಮಾಚಾರು: ಸುರೇಶ್ ನಾಯ್ಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ವಿತರಣೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಕವನ ಸ್ವ-ಸಹಾಯ ಸಂಘದ ಜಾಲಜಾಕ್ಷಿ ರವರ ಗಂಡ ಸುರೇಶ್ ನಾಯ್ಕ್ ರವರಿಗೆ ಚರ್ಮ ರೋಗ ಸಂಬಂದಿಸಿದ ಕಾಯಿಲೆಯಿಂದ ಬಳಲುತಿದ್ದು ಸದ್ರಿ ಕಾಯಿಲೆ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಡಾ ಹೆಗ್ಗಡೆಯವರು ಧನ ಸಹಾಯ ರೂ 15,000 ಮಂಜೂರು ಮಾಡಿದ್ದು ಈ ಮೊತ್ತದ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ಮಾಚಾರು ಒಕ್ಕೂಟದ ಮಾಜಿ ಅಧ್ಯಕ್ಷ ಬಾಬು ನಾಯ್ಕ್, ಒಕ್ಕೂಟದ ಅಧ್ಯಕ್ಷರು ಸುರೇಶ್ ನಾಯ್ಕ್ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ವನಿತಾ, ಒಕ್ಕೂಟದ ಕಾರ್ಯದರ್ಶಿ ಲೋಲಾಕ್ಷಿ ದಾಖಲಾತಿ ಸಮಿತಿ ಸದಸ್ಯರು ದಿನೇಶ್ ಮತ್ತು ಊರವರು ಸಂಘದ ಸದಸ್ಯರು, ಸೇವಾಪ್ರತಿನಿಧಿ ಹೇಮಲತಾ ಉಪಸ್ಥಿತರಿದ್ದರು.

Exit mobile version