Site icon Suddi Belthangady

ಜು.29: ವಿಕಲಚೇತನರ ವಿವಿಧ ಅಗತ್ಯ ಸಾಧನ ಸಲಕರಣೆಗಳಿಗಾಗಿ ನೋಂದಾವಣಾ ಶಿಬಿರ

ಬೆಳ್ತಂಗಡಿ: ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜು.29ರಂದು ತಾಲೂಕಿನ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ಒದಗಿಸುವ ಹಿನ್ನಲೆಯಿಂದ ತಮ್ಮ ತಮ್ಮ ಬೇಡಿಕೆಗಳಿಗಿ ನೋಂದಾಯಿಸಿಕೊಳ್ಳಲು ಬಾಕಿ ಇರುವ ವಿಕಲಚೇತನರಿಗಾಗಿ ಶಿಭಿರ ಏರ್ಪಡಿಸಲಾಗಿದೆ ಅದುದರಿಂದ ಈ ಶಿಬಿರಕ್ಕೆ ಹಾಜರಾಗುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಕಲಾಂಗತೆ ಪ್ರಮಾಣ ಪತ್ರ (UDID), ಪಾಸ್ಪೋರ್ಟ್ ಸೈಜ್ 2 ಫೋಟೋ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತರಬೇಕು.

ಈ ಶಿಬಿರಕ್ಕೆ ಹಾಜರಾಗುವಂತೆ ಕ್ರಮ ವಹಿಸಲು ಪಿಡಿಓಗಳಿಗೆ, ಎಂ.ಆರ್‌.ಡಬ್ಲ್ಯೂ, ವಿ.ಆರ್‌.ಡಬ್ಲ್ಯೂ ಹಾಗೂ ಯೂ.ಆರ್.ಡಬ್ಲ್ಯೂ ಆದೇಶಿಸಲು ಮಂಗಳೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version