Site icon Suddi Belthangady

ಧರ್ಮಸ್ಥಳ: ನಾರ್ಯದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿ ಸೇತುವೆ- ಘನವಾಹನಗಳಿಗೆ ಗ್ರಾ.ಪಂ ನಿಂದ ಸಂಚಾರ ನಿಷೇಧ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೇತ್ರಾನಗರ ದೊಂಡೋಲೆ ನಾರ್ಯ ಮಾರ್ಗವಾಗಿ ಬೆಳಾಲು ಗ್ರಾಮಕ್ಕೆ ಸಂಪರ್ಕವಾಗುವ ರಸ್ತೆಯ ನಾರ್ಯ ಎಂಬಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಸೇತುವೆ.ಸದ್ರಿ ರಸ್ತೆಯಲ್ಲಿ ದೊಡ್ಡ ವಾಹನ ಅಥವಾ ಸಾಮಾಗ್ರಿ ತುಂಬಿದ ಲೋಡ್ ವಾಹನ ಹೋದಲ್ಲಿ ಅಪಾಯ ಗ್ಯಾರಂಟಿ, ಕೆ ಎಸ್ ಆರ್ ಟಿ ಸಿ ಬಸ್ಸು ಸಂಪರ್ಕವನ್ನು ತಾತ್ಕಾಲಿಕವಾಗಿ ಸಂಚಾರವನ್ನು ನಿಲ್ಲಿಸಲಾಗಿದೆ.

ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ಸ್ಥಳಕ್ಕೆ ಭೇಟಿ ನೀಡಿ, ಘನ ವಾಹನಗಳ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಲಾಯಿತು.

ಧರ್ಮಸ್ಥಳ ಬೆಳಾಲು ಸಂಪರ್ಕ ರಸ್ತೆ ಆಗಿರುವುದರಿಂದ ಮಳೆಹನಿ ಯೋಜನೆಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

Exit mobile version