Site icon Suddi Belthangady

ಬೈಕ್ ಅಪಘಾತದಲ್ಲಿ ಮೃತಪಟ್ಟ ಬಾರ್ಯದ ಶಿವಾನಂದರ ಕುಟುಂಬಕ್ಕೆ ಬೇಕಿದೆ ಸಹಾಯದ ನೆರವು

ಬೆಳ್ತಂಗಡಿ: ತುರ್ಕಕಳಿಕೆಯಲ್ಲಿ ಜು.20ರಂದು ಬೈಕ್‌ಗಳು ಮುಖಾಮುಖಿಯಾಗಿ ಮೃತಪಟ್ಟ ಬಾರ್ಯದ ಶಿವನಾಂದರ ಕುಟುಂಬಕ್ಕೆ ಬೇಕಿದೆ ಸಹಾಯ ಹಸ್ತ.ಬಾರ್ಯ ಕೊಟ್ರಸ್ ದಿ.ಉಗ್ಗಪ್ಪ ಮೂಲ್ಯರ ಕಿರಿಯ ಪುತ್ರ ಶಿವನಾಂದ ಮೃತ ರ್ದುದೈವಿ. ಹಿರಿಯ ಪುತ್ರ ಧನಂಜಯ ಗಂಭಿರ ಗಾಯಗೊಂಡಿದ್ದಾರೆ.

ಇವರ ತಾಯಿ ಆನಾರೋಗ್ಯ ಪೀಡಿತದಿಂದ ಮಲಗಿದ ಸ್ಥಿಯಲ್ಲಿದ್ದಾರೆ. ಶಿವಾನಂದರ ಮುಂದಿನ ಕಾರ್ಯಕ್ಕೆ ಹಣದ ಕೊರತೆ ಎದುರಾಗಿದೆ. ಇನ್ನೊಂದೆಡೆ ಧನಂಜಯ ಚಿಕಿತ್ಸೆಯ ಖರ್ಚುವಿಗೆ ಹಣವಿಲ್ಲ. ಕುಟುಂಬ ಆರ್ಥಿಕ ಬಿಕ್ಕಟಿಗೆ ತಲುಪಿದ್ದು ಸಹಾಯ ಹಸ್ತ ಕೇಳುತ್ತಿದ್ದಾರೆ.

ಬಾರ್ಯದ ಯುವಕರು ಶಿವಾನಂದ ಹೆಲ್ಪ್ ಲೈನ್ ವ್ಯಾಟ್ಸಪ್ ಗ್ರೂಪ್ ತೆರೆದು ದಾನಿಗಳ ಸಹಾಯ ಹಸ್ತಕ್ಕೆ ವಿನಂತಿಸುತ್ತಿದ್ದಾರೆ ಸಹೃದಯಿ ದಾನಿಗಳು ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದು.9686891178

Exit mobile version