Site icon Suddi Belthangady

ಕೊಯ್ಯೂರು: ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ರೋಹಿತಾಶ್ವ, ಕಾರ್ಯದರ್ಶಿಯಾಗಿ ಓಬಯ್ಯ ನಾಯ್ಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಸಾಲ್ಯಾನ್

ಕೊಯ್ಯೂರು: ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೆರಾಲ್ ಕೊಯ್ಯೂರು ಇದರ ಮಹಾಸಭೆಯು ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಗೌಡ ಬಚ್ಚಿರೆದಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಸಮಿತಿಯೊಂದನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ವಿಶ್ವನಾಥ ಗೌಡ ಬಚ್ಚಿರೆದಡಿ, ಅಧ್ಯಕ್ಷರಾಗಿ ರೋಹಿತಾಶ್ವ ಉಮಿಯ ದರ್ಖಾಸ್, ಉಪಾಧ್ಯಕ್ಷರಾಗಿ ಸುಂದರ ಗೌಡ ಕಜೆ ಮತ್ತು ರಮೇಶ ಗೌಡ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಓಬಯ್ಯ ನಾಯ್ಕ ಆದರ್ಶನಗರ, ಜೊತೆ ಕಾರ್ಯದರ್ಶಿಗಳಾಗಿ ಅಶೋಕ ಪೂಜಾರಿ ಕುಇಿಮೇರು ಮತ್ತು ಜಿತೇಶ್ ಪೂಜಾರಿ ಸಾಂತ್ಯೋಡಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಸಾಲ್ಯಾನ್ ಆದರ್ಶನಗರ, ಗೌರವ ಸಲಹೆಗಾರರುಗಳಾಗಿ ಪ್ರಚಂಡಬಾನು ಭಟ್ ಪಾಂಬೆಲು, ಪಿ.ಚಂದ್ರಶೇಖರ ಸಾಲ್ಯಾನ್, ಸಲಹೆಗಾರರುಗಳಾಗಿ ಶೇಖರ ಗೌಡ ಕೋರಿಯಾರು ಮತ್ತು ವಸಂತ ನೇಕಾರ ಮುಂಡೆವು, ಲೆಕ್ಕಪರಿಶೋಧಕರಾಗಿ ಲಿಂಗಪ್ಪ ಗೌಡ ಬೆರ್ಕೆ, ಹೇಮಂತ ದೇಂತ್ಯಾರ್ ಬೊಟ್ಟು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಲಿಂಗಪ್ಪ ಗೌಡ ಬೆರ್ಕೆ ಸ್ವಾಗತಿಸಿ, ಹೇಮಂತ ದೆಂತ್ಯಾರು ಬೊಟ್ಟು ವಂದಿಸಿದರು.ಕಾರ್ಯದರ್ಶಿ ಮನೋಜ್ ಕುಮಾರ್ ಕಜೆ ಯವರು ಲೆಕ್ಕಪತ್ರ ಮಂಡಿಸಿದರು.

Exit mobile version